ಬಾ ಗೆಳೆಯ ಬಾ
ಹೃದಯದಂಗಳದಲ್ಲಿ
ಚಿತ್ತಾರ ಬಿಡಿಸು ಬಾ
ಬಾನಿನಂಗಳದಲ್ಲಿ
ಚಂದಿರ ನೀನಾಗು ಬಾ
ನೀ ಬರುವಿಯೆಂದು
ಕಾಯುತಿರುವೆ ಕಾತುರದೆ
ಇಹಪರವ ಮರೆತು
ಹೃದಯ ಬಾಗಿಲು ತೆರೆದು
ಕಣ್ಣಿನಲಿ ಪ್ರೀತಿ ದೀಪ ಬೆಳಗಿಸಿ
ಮುಗುಳ್ಳಗೆಯ ಮಲ್ಲಿಗೆ ಮುಡಿದು
ಮೌನ ಬಂಗಾರದ ಒಡವೆ ತೊಟ್ಟು
ನಿನ್ನ ದಾರಿಗೆ ಹೂ ಚೆಲ್ಲಲು
ಮನದ ಕತ್ತಲೆ ಕಳೆವ
ಜೀವ ಜ್ಯೋತಿ ನೀನಾಗು ಬಾ.
ಬರಡಾದ ಬದುಕಿಗೆ
ಚೈತನ್ಯ ಚಿಲುಮೆಯಾಗು ಬಾ
ಬಯಕೆಗಳ ಬೆಂಕಿಗೆ
ವರುಣ ನೀನಾಗು ಬಾ
ಏಕತಾನದ ಬಾಳಿನಲ್ಲಿ
ಸುಸ್ವರವ ನುಡಿಸು ಬಾ
ರಾಮನಿಗೆ ಕಾಯ್ದ ಶಬರಿಯಂತೆ
ಚಂದ್ರಮಗೆ ಕಾಯುವ ಚಕೋರಿಯಂತೆ
ಭ್ರಮರಂಗೆ ಪರಿತಪಿಸುವ ಹೂವಿನಂತೆ
ಭಕ್ತನಿಗೆ ಕಾಯುವ ಭಗವಂತನಂತೆ
ಬಾ ಗೆಳೆಯ ಬಾ
ಹೃದಯಂಗಳದಲ್ಲಿ
ಚಿತ್ತಾರ ಬಿಡಿಸು ಬಾ.
*****
Related Post
ಸಣ್ಣ ಕತೆ
-
ಗದ್ದೆ
ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…
-
ಜೀವಂತವಾಗಿ…ಸ್ಮಶಾನದಲ್ಲಿ…
ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…
-
ತ್ರಿಪಾದ
ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಹಳ್ಳಿ…
ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…